ಆತ್ಮಾನುರಾಗ

ಓ ಶಿವೆಯೇ !
ಮಲ್ಲಿಗೆ ಹೂ ಬನದ ನಿವಾಸಿಯೇ…
ಪ್ರೇಮದೆದೆಯ ನಡೆಮಡಿಯ ಹಾಸಿನ ಮೇಲೆ
ಹೂಪಾದ ಮುದ್ರೆಯನೊತ್ತುತ್ತ ಬಾರೆ.

ನಿನ್ನ ದರ್ಶಿಸುವ
ಲೆಕ್ಕವಿರದ ಮೆಚ್ಚುಗೆಯ ನಯನಗಳಲಿ
ಯುಗಾದಿ ಹಬ್ಬದ ಚಿಗುರು ಚಿಗುರು
ಮಾವು, ಬೇವು ಹೊಂಗೆ ತರುಗಳ
ಕುಂದದ ಸೊಂಪು, ತಂಪನೆರೆಯ ಬಾರೆ.

ಜಾಜಿ, ಮಲ್ಲಿಗೆ, ಸಂಪಿಗೆ, ಸೇವಂತಿಗೆ ತೋಟದಲಿ
ಮಧುವ ಹೀರುತ್ತಾ ಮೈಮರೆವ
ಬಣ್ಣ ಬಣ್ಣದ ಚಿಟ್ಟೆ, ದುಂಬಿಗಳ
ಕೇಳಿ ಕಲರವ ಗೋಷ್ಠಿಯ ರಸಾನಂದ
ವಿಹಾರಕ್ಕೆ ನೇತಾರಳಾಗಿ ಬಾರೆ.

ಸಗ್ಗದಾಘ್ರ್‍ಆಣಕ್ಕೆ ವಶವಾಗಿ
ಎಗ್ಗಿಲ್ಲದೆ ಮಾಡು, ಗೂಡುಗಳ ಮಾಡಿಕೊಂಡು
ಚಿತ್ತಾರದ ವರ್ಣಮಯ ತನುಗಳಲಿ
ರುದ್ರ ಭೀಕರ ಹೊರಳು, ಸುರುಳಿಗಳಲಿ ಮಲೆತಿರುವ
ಸನಿಹ ಸಾರೆ ಪೂತ್ಕರಿಸುವ
ಕ್ಷಣ ಮರೆಯೆ ಯಮ ಸದನಕ್ಕಟ್ಟುವ
ಸರ್ಪ ಬಗೆಗಳ ಮಣಿಸಿ
ಪ್ರೇಮ ಕೇದಿಗೆಯ ಮುಡಿಸ ಬಾರೆ.

ವಿಜ್ಞಾನ, ತಂತ್ರಜ್ಞಾನದ ನೇತ್ಯಾತ್ಮಕ ಪ್ರಭಾವದಲಿ
ಶ್ರಮದ ಸೊಲ್ಲೂ ಕೇಳ ಬಯಸದ
ಭೋಗ ಸಂಸ್ಕೃತಿಯ ಬೆನ್ನು ಬಿದ್ದಿರುವ

ಮಾರಿಗೆ ಸಂಸ್ಕೃತಿ ಅಪ್ಪಿ
ಜನ್ಮಜಾತ ಗುಣ, ನೀತಿಗೆ ತಿಲಾಂಜಲಿಯನಿತ್ತು
ಹಾಡುವುದನ್ನೇ ಮರೆತಿರುವ ಮಾನವ ಕೋಗಿಲೆಗಳ
ಜಾಗೃತಗೊಳಿಸುವ ಚಿತ್ತ ಚೇತನಿಯೆ ಬಾರೆ.

ಶುದ್ಧ ಸಲಿಲದಿ ತುಂಬಿ
ಜುಳು ಜುಳು ನಾದ ಮಾಡುತ್ತಾ
ನರ್ತಕಿಯ ಲಾಸ್ಯದಲಿ ಪ್ರವಹಿಸುವ ಹಿರಿಯ ತರಂಗಿಣಿಯ
ಇಕ್ಕೆಲದಲಿ ಸೊಕ್ಕಿ ಬೆಳೆದು
ವಸಂತನಾಗಮನದಿ ನವ ಜೀವದಾಂಗುಡಿಯ
ಗುಡಿಯಂತಿರುವ
ಮಾಮರಗಳೆದೆಯಲ್ಲಡಗಿ
ಅಮೃತ ಗಾನಧಾರೆಯ ಹರಿಸುವ
ಕೋಗಿಲೆ ಸಂಕುಲದ ಮುಂದಾಳಾಗಿ ಬಾರೆ.

ಭುವನ ಭಾಗ್ಯನು ಮೂಡಿ ಬರುವ ಪ್ರಶಸ್ತ ಕಾಲದಲಿ
ಕೀಟ, ಪಕ್ಷಿ, ಪ್ರಾಣಿಗಳು
ಆನಂದದಲಿ ದನಿಗೆ ದನಿ ಬೆರೆಸಿ
ಹೊಮ್ಮಿಸುವ ದಿವ್ಯಗಾನ ಧಾರೆಯಾಸ್ವಾದನೆಯಲಿ
ಒತ್ತೊತ್ತಿ ಕುಳಿತು
ಹೃದಯದಲಿ ಹೃದಯ ಬೆಸೆಯುವ
ಜೀವ ಸೊಬಗಿನ ದರ್ಶನವ ಮಾಡಿಸುವ
ಸತ್ಯ ಪ್ರೇಮವೇ ಮೈವೆತ್ತ ಮೂರುತಿಯಾಗಿ ಬಾರೆ
ಬಾ! ಬಾರೆ ಶಿವೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತ ಶ್ರವಣ
Next post ಮಾಡಿದ ತೋರಣ ಚಂದವಿಲ್ಲದಿದ್ದರೇಂತೆ ? ತೋಟದ ಚಂದ ಸಾಲದೇ ?

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys